ಶುಕ್ರವಾರ, ಜೂನ್ 28, 2013

ಪಶ್ಚಿಮ ಘಟ್ಟಗಳ ಶೃಂಗದ ಮಡಿಲಲ್ಲಿ -1 : 01 & 02 ಜೂನ್ 2013


ಬೆಳಗ್ಗೆ ಎದ್ದು ಪಲಾವ್ ತಿಂದು, ಟೀ ಸೇವಿಸಿ ಅಲ್ಲಿಂದ ಯಡಕುಮರಿಯತ್ತ ಚಾರಣ ಪ್ರಾರಂಭಿಸಿದೆವು. ಅಲ್ಲಿ ಒಂದು ಸೀಬೆ ಮರದಲ್ಲಿ ಟೈಗರ್ ಹತ್ತಿ ಹಣ್ಣು ಕೀಳುತ್ತಿದ್ದ. ಅವನು ಎಸೆದ ಸೀಬೇಕಾಯಿಯನ್ನು ತೆಗೆದುಕೊಳ್ಳಲು ನಾನು ಸುಮ ಒಟ್ಟಿಗೆ ಓಡಿ ಅಕ್ಕ Bond ಕೊಟ್ಟ ಒಂದು  push ಗೆ ನಾನು ರಜನಿಕಾಂತ್ Style ನಂತೆ  ಪಲ್ಟಿ ಹೊಡೆದು ಬಿದ್ದೆ. ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ!!!
(ಚಿಕ್ಕಂದಿನಲ್ಲಿ ಆಡಿದ ನಾಯಿ ಮತ್ತು ಮೂಳೆ ಆಟವನ್ನು ನಾವು ಇನ್ನೂ ಮರೆತಿಲ್ಲವೆಂದು ಹೆಮ್ಮೆಯಿಂದ ಹೇಳುತ್ತೇನೆ)
ಅಲ್ಲಿ ನಮ್ಮ ಪಾಂಡಿತ್ಯವನ್ನು ನೋಡಿದ ಯಾರೋ ಮಾಲಾಶ್ರಿಯವರ ಹೊಸ ಸಿನೆಮಾಗೆ Stunt Artist ಬೇಕು ಬರ್ತ್ಯಾ ಅಂತ ಕೇಳಿದ್ರು .
ನಾನು ನಟಿಸೋದು ಆಮೇಲೆ TV9ನಲ್ಲಿ ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಹಂಡೆಯಂತಿರುವ ಮಾಲಾಶ್ರಿ ಎಗರಿ ಬೀಳುವಾಗ ಲೋಟದಂತಾಗಿ ಬಿಡುತ್ತಾಳೆ ಅನ್ನೋದು ಎಲ್ಲಾ ಯಾಕೆ ಅಂತ ನಾನೇ ಆ offerನ ತಿರಸ್ಕರಿಸಿಬಿಟ್ಟೆ!!!

ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಒಂದು ಪುಟ್ಟ ಗುಡ್ಡವನ್ನು ತಲುಪಿದೆವು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಎಷ್ಟು ಕಣ್ತುಂಬಿಸಿಕೊಂಡರೂ  ಸಾಲದು ... ಸುತ್ತಲಿನ ಹಸಿರ ವನರಾಶಿ, ಕೆಳಗೆ ಚಿಕ್ಕದಾಗಿ ಕಾಣುತ್ತಿದ್ದ ರೈಲ್ವೆ ಹಾದಿ ಮತ್ತು ಅದಕ್ಕೆ ಮಾಡಿದ್ದ ಸುರಂಗ ಎಲ್ಲವನ್ನೂ ನೋಡಿ ಮನಸ್ಸು ಕ್ಷಣಕಾಲ ಮೂಕವಿಸ್ಮಿತ ....
ಪದಗಳಲ್ಲಿ ವರ್ಣಿಸಿದರೆ ಆ ಪ್ರಕೃತಿ ಸೌಂದರ್ಯದ ಸೌಂದರ್ಯವನ್ನು ಕಡಿಮೆ ಮಾಡುತ್ತಿದ್ದೀನೇನೋ ಅನ್ನಿಸುತ್ತೆ...
                                             ಮಾತಿಗೊಂದು ಅರ್ಥವೇಕೆ,
                                              ಅರ್ಥವಿದ್ದರಷ್ಟೆ ಸಾಕೆ?
                                             ಮೋಡಗಳನು ನೋಡಿರಲಿ
                                              ಅರ್ಥ ಅಲ್ಪ ಎಂದು ತಿಳಿ
                              ಮಾತು ಅರ್ಥ ಎರಡು ವ್ಯರ್ಥ ಸ್ವ-ಅರ್ಥವಿರದಿರೆ
                                                            (ಕುವೆಂಪುರವರ ಪಕ್ಷಿಕಾಶಿ ಕವನಸಂಕಲನದ ಪದ್ಯ)

ನೋಡಿ ಜಾಗ ಇಷ್ಟು ಚೆನ್ನಗಿದ್ದ್ಮೇಲೆ Photo Session ನಡಿಬೇಕಲ್ವ ... ಇಲ್ಲಿ ಸುಮ-ಮಂಜು ಜೋಡಿ ಫೋಟೋ ತೇಗೀತಿದ್ರೆ ನನ್ನ ಬಾರೆ ಅಂತ ಎಳ್ಕೊಂಡು पति पत्नी और वो ಅಂದ್ಲು. ನಂಗೆ "ವೋ" ಆಗೋಕ್ಕೆ ಇಷ್ಟ ಇರ್ಲಿಲ್ಲ ಬೇಡ ಬೇಡ ಅಂತಿದ್ದೆ ಅವಳು ಬಿಡಲೇ ಇಲ್ಲ(ಒಂದ್ ಸಲ ಬಿದ್ದಿದ್ ಪೆಟ್ಟಿಗೆ ಕುಂಟುತ್ತ ನಡೀತಿದ್ದೆ ಅದಕ್ಕೆ ಹೆದರಿ ಜಾಸ್ತಿ Protest ಮಾಡೋಕ್ಕೆ ಹೋಗ್ಲಿಲ್ಲ)






ಅಲ್ಲಿಂದ ಕಾಡು ಹಾದಿಯಲ್ಲಿ ಸಾಗಿ ರೈಲ್ವೆ ಹಾದಿಗೆ ತಲುಪಿದೆವು. ಅಲ್ಲಿ ರೈಲ್ವೆ ಹಳಿಯ ಮೇಲೆ ಮತ್ತೊಂದು ಫೋಟೋ ಸೆಶನ್.

ಅಲ್ಲಿಂದ ಯಡಕುಮರಿ ರೈಲ್ವೆ ನಿಲ್ದಾಣ ತಲುಪಿ,ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಚಾರಣ ಪ್ರಾರಂಭಿಸಿದೆವು. ಬಿದಿರು ಮೆಳೆಯಲ್ಲಿ ಸಪ್ತಗಿರಿ ಜೊತೆ ಮಾತಾಡ್ತಾ ನಡೀತಿದ್ದೆ. ಅವರ ಗಮನವೆಲ್ಲ ನೆಲದ ಮೇಲೆ ನಮ್ಮ ರಕ್ತ ಹೀರಲು ಕಾದು ನಿಂತ ಜಿಗಣೆಯ ಮೇಲೆಯೇ. ಒಂದು ಸಣ್ಣ ತೊರೆಯನ್ನು ದಾಟಿ ಮುಂದುವರಿದರೆ ಅಲ್ಲಿ ಇಂಬಳಗಳ ಸುರಿಮಳೆ ... ನಂಗೆ ರಕ್ತ ಇಲ್ಲ ಇನ್ನು ಇವಕ್ಕೆ ಬೇರೆ !!!



ಟೈಗರ್, ಗಿರಿ, ನವೀನ ಯಾರೂ ಜಿಗಣೆ ಬಗ್ಗೆ ತಲೇನೇ ಕೆಡುಸ್ಕೊತಿಲ್ಲ ... ಕಡೆಗೂ ಕೆಂಪು ಹೊಳೆ ಹತ್ತಿರ ತುಂತುರು ಮಳೆಯಲ್ಲಿ ಒಡೋಡ್ಕೊಂಡು ಬಂದು ಸೇರುದ್ವಿ. ಹೊಳೆ ದಾಟಿ ಹೆದ್ದಾರಿ ತಲುಪುವಷ್ಟರಲ್ಲಿ ಗಂಟೆ 3. ಅಲ್ಲಿಂದ ಇರ್ಮಯಿ ಜಲಪಾತದತ್ತ ಹೊರಟೆವು. ಪುಣ್ಯಕ್ಕೆ ಆ ಜಲಪಾತ ಇನ್ನು ನಮ್ಮ ದುಷ್ಟ ಜನರ ಕಣ್ಣಿಗೆ ಬೀಳದೆ ಪ್ಲಾಸ್ಟಿಕ್ ಮುಕ್ತ ಜಾಗವಾಗಿತ್ತು. ಸಣ್ಣದಾಗಿ ಹರಿಯುವ ಝರಿ ಮತ್ತು ಅದರಿಂದ ನೈಸರ್ಗಿಕವಾಗಿ ನಿರ್ಮಿತವಾಗಿದ್ದ  ಪುಟ್ಟ ಕೊಳ... ನೀರಲ್ಲಿ ಮಿಂದು ಧರ್ಮಸ್ಥಳದ ಮಂಜುನಾಥನ ದರ್ಶನಗೈಯ್ಯಲು ನಡೆದೆವು.

ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದಾಗ ಅದ್ಯಾವ್ದೋ ಕಂಬಿಗೆ ಕಟ್ಟಿದ್ದ  Friendship Band ಕಾಣುಸ್ತು. ದೇವರು ಕೊಟ್ಟ ಪ್ರಸಾದ ಅಂತ ಹರ್ಷ ಅದನ್ನ ಕದ್ದು ಬಿಟ್ಟ.(ಸುರೇಶನಿಗೆ ನಿನ್ನ ಚಿನ್ನದ ಚೈನನ್ನು ಕಟ್ಟು ಅಂತ ಉಚಿತ ಸಲಹೆ ಬೇರೆ !!!) ನಾವು ಆ Band Ownerಗೆ ಇದ್ದ ರೋಗ ನಿಂಗೂ ಬರತ್ತೆ, ಗಲೀಜು ಅಂತ ಏನೇನು ಹೇಳಿದರೂ ಆಸಾಮಿ DON'T CARE ಅಂದ್ಬಿಟ್ಟ. Double hearted friendship Band ಕೈಗೆ ಹಾಕ್ಕೊಂಡ್ರೆ ಇಬ್ಬರು ಹುಡ್ಗೀರು ಸಿಗ್ತಾರೆ ಅನ್ನೋದು ಅವನ ಭಾವನೆ ( ಪೂನಂ ಗೆ ಕನ್ನಡ ಓದೋಕ್ಕೆ ಬರೋಲ್ಲ ಅನ್ನೋ ಧೈರ್ಯದಿಂದ ಇದನ್ನ ಬರೀತಿದೀನಿ). ದರ್ಶನ ಮುಗಿಸಿ ಪ್ರಸಾದಕ್ಕೆ ಹೋದೆವು. ಅಲ್ಲಿ ಯಾರೋ ದಡೂತಿ ಹೆಂಗಸು ನಮ್ಮ ಜಿಮ್ ಬಾಡಿ ರಾಜೇಶ್ ನೆ ತಳ್ಳಿಬಿಟ್ಟಳಂತೆ!!
ಊಟ ಮುಗಿಸಿ ಬಸ್ ಹತ್ತಿ ಬೆಂಗಳೂರಿನತ್ತ ಮುಖ ಮಾಡುವಷ್ಟರಲ್ಲಿ ಗಂಟೆ 10. ಹರ್ಷನ ಪ್ರೇಮದ ಕಥೆ-ವ್ಯಥೆ ಕೇಳಿದ ರವೀಂದ್ರ ಅಂತೂ ಹರ್ಷ- ಪೂನಂ ರವರ ಮದುವೆ ಮಾಡಿಸಲು ತನ್ನ ಅಪ್ಪ ಮಾಡುವ ಪೌರೋಹಿತ್ಯವನ್ನು ತಾನೇ ಮಾಡಲು ಅಣಿಯಾಗಿಬಿಟ್ಟ!!!
ಭಾರತ್ ಬಂದ್ ತರ ಎಲ್ಲರು ಸೋಮವಾರ ರಜೆ ಹಾಕಲು ಅಣಿಯಾಗಿಬಿಟ್ಟರು. ಎಲ್ಲರನ್ನು ಬೇಡವೆಂದು ಸಮಾಧಾನಗೊಳಿಸುವಷ್ಟರಲ್ಲಿ ಹರ್ಷ ಸಾಕಾಗಿ ಹೋದ.ಈಗ ಶಶಿ ರವರ ಪ್ರೇಮದ ಕಥೆ ಶುರು. ಎಲ್ಲರಿಗೂ ನಿದ್ದೆ ಬರುತ್ತಿದ್ದರೂ 11 ವರ್ಷಗಳ Love Marriage Story ಕೇಳಲು ಕುತೂಹಲ. ಬಾಸು ಬಾಸು ಅಂತ ಪಾಪ ಅವರ ಪ್ರಾಣ ಹಿಂಡ್ಬಿಟ್ವಿ.

                               ದಿನಕ್ಕೊಮ್ಮೆ ಮೂಡುಂಟು, ದಿನಕ್ಕೊಮ್ಮೆ ಮುಳುಗು
                               ದಿನದ ಕತ್ತಲೆಯುಂಟು, ದಿನದ ಬೆಳಗು


ಚಾರಣವೆಲ್ಲಾ ಮುಗಿದು ರಾಜಧಾನಿ ತಲುಪಿದಾಗ ಗಡಿಯಾರ 6.30 ಎಂದು ತೋರಿಸುತ್ತಿತ್ತು.



ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಗಿರೀಶ್ ನಾಗಮಂಗಲ - GPS ತಂದು ಚಾರಣದ ಉಸ್ತುವಾರಿಯಲ್ಲಿ ಸಹಕಾರ ನೀಡಿದ್ದಕ್ಕೆ.
ರಾಮ್ ಕುಮಾರ್- ಕಾಗಿನಹಾರೆಯ ನಿರ್ವಾಹಕರ ಬಳಿ ಮಾತನಾಡಿ ಅವರನ್ನು ತಣ್ಣಗೆ ಮಾಡಿದ್ದಕ್ಕೆ.
ವಿಶ್ವಾಸ್ HK - ಕಾಗಿನಹಾರೆಯ ಕೋಟೆಯ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ
ಗೋಪಾಲ್ - ಅನ್ನದಾತೋ ಸುಖೀಭವ