ಗುರುವಾರ, ಫೆಬ್ರವರಿ 28, 2013

ಕಾಡುವ ಹಾಡು - ಜಯತೇ .. ಸತ್ಯಮೇವ ಜಯತೇ


ಕೇಳಿದೊಡನೆ ಭಾವಕ್ಕೆ ತಟ್ಟುವ, ಮನಕ್ಕೆ ಮುಟ್ಟುವ ಹಾಡು.....




ಮಠ ಚಿತ್ರ ನೋಡಿದಾಗ ತುಂಬಾ ಮನಸ್ಸಿಗೆ ಹಿಡಿಸಿದ ಹಾಡು ... ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನು ಗುರುಪ್ರಸಾದ್ ರವರು ಬಹಳ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಮತ್ತು ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ ಸಹ .... 












 ಚಿತ್ರ - ಮಾರ್ಗದರ್ಶಿ/ ಮಠ                                       ಗಾಯಕರು - ಮನ್ನಾ ಡೇ
ಸಂಗೀತ - ಜಯದೇವ/ ವಿ.ಮನೋಹರ್                       ಸಾಹಿತ್ಯ - ಕು.ರಾ.ಸೀತಾರಾಮಶಾಸ್ತ್ರಿ


ಜಯತೇ ಜಯತೇ ಜಯತೇ .... ಸತ್ಯಮೇವ ಜಯತೇ ..ಸತ್ಯಮೇವ ಜಯತೇ ...

ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ...ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಗುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಧುರ ಭಾವ ತುಂಬಿದಂಥ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂಥ ನಿಧಿಯೆ ಇಲ್ಲ ಬಲ್ಲಿರ
ಸರಳ ಜೀವಿಗೆಂದಿಗೂ ಸೋಲೆ ಇಲ್ಲ ಕಾಣಿರ
ಸತ್ಯವಾದ ಘನತೆ ಸೋಲೆ ಕಾಣದಂತೆ

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲಿ ಇರುವ ಅಂತರಾತ್ಮ ಕಾಣದೆ
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ