ಮಂಗಳವಾರ, ಅಕ್ಟೋಬರ್ 30, 2012

ಪ್ರವಾಸ ಕಥನ - ಶೃಂಗೇರಿ, ಕುದುರೆಮುಖ, ಹೊರನಾಡು - 27 & 28 ಅಕ್ಟೋಬರ್


ಶುಕ್ರವಾರ(26.10.2012) ರಾತ್ರಿ ವಿನಯ್ KGS ಕಳುಹಿಸಿದ ಇ-ಮೇಲ್ ನಂತೆ ಎಲ್ಲರೂ ಶಾಂತಲಾ ರೇಷ್ಮೆ ಅಂಗಡಿ( Shantala Silk House),ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ರಾತ್ರಿ ಸುಮಾರು 10ರ ಹೊತ್ತಿಗೆ ಸೇರಿದೆವು. 10:30ರ ಹೊತ್ತಿಗೆ ಬೆಂಗಳೂರಿನಿಂದ ಹೊರಟ ನಾವು ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ವಾಹನ ಪೆಟ್ರೋಲ್ ಬಂಕ್ ಬಳಿ ನಿಂತು ಹೋಯಿತು. ಚಾಲಕ ಎಲ್ಲರನ್ನೂ ಕೆಳಗಿಳಿಯಲು ಹೇಳಿದರು. ನಾನು ಏಕೆ ಎಂದು ಯೋಚಿಸ್ತಿದ್ದೆ, ಅಷ್ಟು ಹೊತ್ತಿಗೆ ವೀರೇ೦ದರ್ धक्का देना है ಅಂದ. ಅಯ್ಯೋ ತಳ್ಳೋ ಮಾಡೆಲ್ ಗಾಡೀಲಿ ನಿಜಕ್ಕೂ ನಾವು ಶೃಂಗೇರಿ ಸೇರ್ತೀವ ಅನ್ನಿಸಿಬಿಡ್ತು. ಎಲ್ಲಾ ಗಂಡ್ ಹೈಕ್ಳು ಕೆಳಗಿಳ್ದು, ಸಾಹಸ ಮಾಡಿ ಗಾಡಿಯನ್ನು ಮುಂದೂಡಿ ಗಾಡಿ ಶುರುವಾದ ನಂತರ ಹತ್ತಿದರು. ವಿನಯ್ KGS ತಂದ ಸಿದ್ಲಿಂಗು ಚಲನ ಚಿತ್ರದ CD ಯನ್ನು ಹಾಕಲಾಯಿತು. ಎಲ್ಲರೂ ಚಿತ್ರವನ್ನು ತುಂಬಾನೇ ಖುಷಿಯಿಂದ ಆಸ್ವಾದಿಸುತ್ತಿದ್ದರು. ಮೊದಲೇ ಆಯೋಜಿಸಿದಂತೆ ಸರಿಯಾಗಿ 12 ಗಂಟೆ ಹೊತ್ತಿಗೆ ಚಿತ್ರಕ್ಕೆ ತಾತ್ಕಾಲಿಕ ತಡೆ ಹಾಕಿ( Pause ), ಅವಿನಾಶ್ ಹುಟ್ಟು ಹಬ್ಬವನ್ನು ಸುಂಕ ಪಾವತಿ ಕೇಂದ್ರ(TOLL GATE)ದ ಬಳಿ ಆಚರಿಸಿದೆವು. ಕೇಕ್ ಅನ್ನು ಕತ್ತರಿಸಲು ಅವಿ ಏನೋ ಕೌತುಕತೆಯಿಂದ ಸಿದ್ಧವಾಗಿದ್ದ. ಆದರೆ ನಮ್ಮ ವಿನಯ್ KGS ಕ್ಯಾಮೆರಾವನ್ನು ಬ್ಯಾಗ್ ನಿಂದ ತೆಗೆದು ಕ್ಲಿಕ್ಕಿಸಲು ಸ್ವಲ್ಪ ತಡಮಾಡಿದ.
( ನಮ್ಮ ಮಂದಿ ಕ್ಯಾಮೆರಾಗೆ ಪೋಸು ಕೊಡೋಕೆ ಎಷ್ಟು ಉತ್ಸುಕರಾಗಿರುತ್ತಾರೆ ಎಂದರೆ 12:07 ತೋರಿಸುತ್ತಿದ್ದ ಗಡಿಯಾರಾನ 12:00 ಎಂದು ಮಾಡೋಕ್ಕೂ ಇವರು ಸಿದ್ಧ!!)

ನಾವು ಶೃಂಗೇರಿ ತಲುಪುವಷ್ಟರಲ್ಲಿ ಸಮಯ ಬೆಳಗ್ಗೆ 7 ಗಂಟೆ( 27.10.2012). ವೀರಾಧಿವೀರರಾದ ವಿನಯ್ KGS ಮತ್ತು ವಿಶ್ವನಾಥ್ ಬಣಕಾರ್ ಎಲ್ಲೆಲ್ಲೋ ಅಲೆದು, ಕಡೆಗೂ ಕಷ್ಟಪಟ್ಟು ಹುಡುಕಿ ಗೊತ್ತು ಮಾಡಿದ್ದ ವಿಶ್ರಾಂತಿ ಗೃಹದಲ್ಲಿ ಸ್ನಾನ ಮುಗಿಸಿ ದೇವರ ದರ್ಶನಕ್ಕೆ ಹೋಗುವ ಹೊತ್ತಿಗೆ 9 ಗಂಟೆ.
ಶೃಂಗೇರಿ - ಶಾರದಾಂಬೆಯ ಸನ್ನಿಧಿ
ಶೃಂಗೇರಿ - ಶಾರದಾಂಬೆಯ ಸನ್ನಿಧಿ

ಭವ್ಯವಾಗಿ ಕಂಗೊಳಿಸುತ್ತಿದ್ದ ವೀಣಾಧರಿ ಬಂಗಾರ ಶಾರದೆಗೆ ನಮಿಸಿ ಚಿರ ಶಾಂತಿ ನೀಡೆಂದು ಪ್ರಾರ್ಥಿಸಿದೆವು. ನಂತರ ಪಕ್ಕದ ಹೊಯ್ಸಳ ಶೈಲಿಯ ದೇವಸ್ಥಾನಕ್ಕೆ ಭೇಟಿಯಿತ್ತು, ಅಲ್ಲಿನ ಶ್ರೀಗಂಧದ ಸರಸ್ವತಿಯನ್ನು ಕಂಡೆವು. ದೇವಸ್ಥಾನದ ಹೊರಭಾಗದಲ್ಲಿ ಇಷ್ಟ ದೇವರೊಂದಿದೆ, ಅದನ್ನು ತೋರಿಸಿ ವಿನಯ್ ಮತ್ತು ಅವಿಗೆ  ಮನದ ಇಚ್ಛೆಯನ್ನು ಬೇಡಲು ಹೇಳಿದೆ. ವಿನಯ್ ಅಂತು ದೀರ್ಘ ದಂಡ ನಮಸ್ಕಾರವನ್ನೇ ಹಾಕಿಬಿಟ್ಟ! ಏನ್ ಕೇಳ್ಕೊಂಡ್ಯಪ್ಪ ಅಂತ ಕೇಳ್ದ್ರೆ SECRET ಅಂದ್ಬಿಡೋದಾ! :-(
ಶೃಂಗೇರಿ

ಪಕ್ಕದಲ್ಲೇ ಹರಿಯುತ್ತಿದ್ದ ತುಂಗಾ ನದಿಯ ಬಳಿ ಮಂಡಕ್ಕಿ(ಪುರಿ) ಯೊಂದಿಗೆ ತೆರಳಿದೆವು. ಮೀನಿಗೆ ಮಂಡಕ್ಕಿಯನ್ನು ಹಾಕಿದಾಗ ಅವು ಅದನ್ನು ಕಣ್ಣೆತ್ತಿಯೂ ಸಹ ನೋಡಲಿಲ್ಲ. ಕಾಸು ಕೊಟ್ಟು ತಂದಿದ್ದಲ್ವ, ಜೊತೆಗೆ ನಮ್ಮ ಹೊಟ್ಟೆಯೂ ಚುರುಗುಟ್ಟುತ್ತಿತ್ತು ಇನ್ನೇನು ಮಾಡೋದು ಅಂತ ನಾವೇ ಅದನ್ನು ತಿನ್ನೋಕೆ ಶುರು ಮಾಡಿದೆವು. ಸ್ವಲ್ಪವೇ ತಿನ್ನುವಷ್ಟರಲ್ಲಿ ನನಗೆ ಜ್ಞಾನೋದಯ ಆಗೋಯ್ತು ಯಾಕೆ ಮೀನುಗಳು ಇದನ್ನು ಮುಟ್ಟಲಿಲ್ಲ ಅಂತ.
( ಒಂದು ದಿನ ಅರ್ಧ ಲೀಟರ್ ಮಂಡಕ್ಕೀನ  ಎಲ್ರೂ ಸೇರಿ ಖಾಲಿ ಮಾಡಕ್ಕೆ ನಮಗೆ ಆಗ್ಲಿಲ್ಲ, ಇನ್ನು ಎಷ್ಟೋ ವರ್ಷಗಳಿಂದ ಪಾಪ ಅದನ್ನೇ ಅವು ಹೇಗೆ ತಾನೇ ತಿಂದಾವು- ಮೀನುಗಳೂ ಬದಲಾವಣೆ ಬಯಸೋದ್ರಲ್ಲಿ ತಪ್ಪೇನಿದೆ!!!???)
ಶೃಂಗೇರಿ - ತುಂಗಾನದಿ

ಆದರೂ, ಎಲ್ಲಾ ಗಡವ ಮೀನುಗಳೇ ಅಲ್ಲಿ. ಹುಡುಕುದ್ರೂ ಒಂದೂ ನನ್ನ SIZEದು ಇಲ್ವಲ್ಲೋ ಅಂತ ಅವಿಗೆ ಹೇಳ್ತಿದ್ದೆ. ಉಪಹಾರ ಮಂದಿರದಲ್ಲಿ ತಿಂಡಿ ಮುಗಿಸಿ ನಮ್ಮ ಪಯಣ ಹನುಮಾನ್ ಗುಂಡಿ( ಸೂತನಬ್ಬಿ ಎಂಬ ಹೆಸರೂ ಇದೆ )ಯತ್ತ ಸಾಗಿತು. ಜಲಪಾತದಡಿಯಲ್ಲಿ ಮನಸೋ ತೃಪ್ತಿ ಆಡಿದ ನಾವು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ವರುಣ್ ಮೂಗಿಗೆ ಪೆಟ್ಟು ಮಾಡಿಕೊಂಡ.
(ಅವಿನಾಶ್ ಹೇಳಿದ ಪ್ರಕಾರ ಅವನ ಹತ್ತಿರ ಆಶೀರ್ವಾದ ಪಡೆಯಲು ಹೋಗಿ ವರುಣ್ ಬಂಡೆಗೆ ಮುಖ ಹೊಡೆದುಕೊಂಡ - ಸಮಗ್ರ ತನಿಖೆಯ ನಂತರ ಸತ್ಯಾಂಶ ಹೊರಬೀಳುವುದು).
ಹನುಮಾನ್ ಗುಂಡಿ( ಸೂತನಬ್ಬಿ)

ಮುಂದೆ ಗಂಗಾಮೂಲ/ವರಾಹ ಪರ್ವತ ( ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಾನ) ಕ್ಕೆ ತಲುಪಿದೆವು. ಸ್ವಲ್ಪ ತಲೆ ನೋಯುತ್ತಿದ್ದ ಕಾರಣ ನಾನು ಬಸ್ಸಿನಲ್ಲೇ ಉಳಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನದೇನನ್ನು ಬರೆಯುತ್ತಿಲ್ಲ.
ನಂತರ ನಮ್ಮ ಸವಾರಿ ಲಕ್ಯಾ ಅಣೆಕಟ್ಟಿನತ್ತ ಸಾಗಿತು. ಅಲ್ಲಿ ಎಲ್ಲರೂ ಗುಂಪು ಛಾಯಾಚಿತ್ರ(GROUP  PHOTO) ತೆಗೆಸಿಕೊಳ್ಳಲು ಅಲ್ಲಿ ಬಂದಿದ್ದ ಪ್ರವಾಸಿ, "ನಂದ" ರವರ ಸಹಾಯ ಕೇಳಿದೆವು. ಎಲ್ಲರನ್ನು ಕಟ್ಟೆಯ ಆಚೆ ಬದಿಯಲ್ಲಿ ಕುಳಿತು ಹಿಂದೆ ತಿರುಗಿ ನೋಡಿ ಎಂದು ಹೇಳಿದರು. ನಾವೇನೋ ಫೋಟೋಗಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿದೆವು (ಅಂದರೆ ಕುಳಿತೆವು) ಆದರೆ ಎಲ್ಲಿ ಕ್ಯಾಮೆರ ಎತ್ತುಕೊಂಡು ಓಡಿಹೋಗುವರೋ ಎಂಬ ಸಣ್ಣ ಅಳುಕು( ಮನುಷ್ಯ ಮನುಷ್ಯನನ್ನೇ ನಂಬದ ಪರಿಸ್ಥಿತಿಗೆ ನಾವಿಂದು ಬಂದು ತಲುಪಿದ್ದೇವೆ). ಪುಣ್ಯಕ್ಕೆ ಆಸಾಮಿ ಹಾಗೇನೂ ಮಾಡದೆ ನಮಗೆ ಸುಂದರ ಛಾಯಾಚಿತ್ರವನ್ನು ತೆಗೆದುಕೊಟ್ಟು ಕ್ಯಾಮೆರಾವನ್ನು ಕೈಗಿತ್ತು ತಮ್ಮ ಹಾದಿ ಹಿಡಿದರು. - ಆ ಕ್ಷಣದಲ್ಲಿ ನಮ್ಮ ನಾಗ್ ಸೋದರರ ಮಿಂಚಿನ ಓಟ ಚಿತ್ರದ ಹಾಡೊಂದು ಮನದಲ್ಲಿ ಮಿಂಚಿ ಮರೆಯಾಯಿತು( ಹಾಡು - ಬೆಳ್ಳಿ ಮೋಡ ಹತ್ತುತ್ತ, ಬಡತನ ಸುಡುತ್ತ - ಈ ಹಾಡಿನಲ್ಲಿ ಅವರು ಫೋಟೋ ತೆಗೆಯುತ್ತ ಕಾರಿನೊಂದಿಗೆ ಪರಾರಿಯಾಗುತ್ತಾರೆ).
ಕಬ್ಬಿಣದ ಖನಿಜಕ್ಕಾಗಿ ಗಣಿಗಾರಿಕೆ ನಡೆದು ಸರ್ಕಾರೇತರ ಸಂಸ್ಥೆ( Non - Government Organisation - NGO )ಯ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ನಡೆದ ಸತತ ಹೋರಾಟದ ಪರಿಶ್ರಮದ ಫಲವಾಗಿ ಈಗ ಗಣಿಗಾರಿಕೆಯು ನಿಂತಿದೆ. ಈ ಸುಂದರ ಪ್ರಕೃತಿಯು ಬರಿ ಮಣ್ಣಲ್ಲದೆ ನಿಸರ್ಗಧಾಮವಾಗಿ ರೂಪುಗೊಂಡಿದೆ. ಒಂದು ಉತ್ತಮ ಪ್ರವಾಸೀ ತಾಣವಾಗಬೇಕಾದ ಎಲ್ಲಾ ಲಕ್ಷಣಗಳೂ ಇದಕ್ಕಿದ್ದು, ಸರ್ಕಾರ ಲಕ್ಯಾ ಅಣೆಕಟ್ಟಿನ ಅಭಿವೃದ್ಧಿಯತ್ತ ಲಕ್ಷ್ಯ ವಹಿಸಬೇಕಾಗಿದೆ.
ಲಕ್ಯಾ ಅಣೆಕಟ್ಟು

ಅಲ್ಲಿಂದ ನಾವು ಅರಣ್ಯ ಇಲಾಖೆಗೆ ಭೇಟಿಯಿತ್ತು, ಕುರಿಂಜಾಲ್  ಅರಣ್ಯ ಪ್ರದೇಶವನ್ನು ಚಾರಣ ಮಾಡಲು ಅಪ್ಪಣೆ ಚೀಟಿಯನ್ನು  ಕೇಳಿದೆವು. ತಲಾ 275ರೂ. ಎಂದು ಹೇಳಿದರು ಮತ್ತು ನಮ್ಮ ಗುರುತಿನ ಚೀಟಿಯ ನಕಲು ಪ್ರತಿ(PHOTO COPY) ಯನ್ನು ನೀಡಿ, ಮೂಲ ಪ್ರತಿಯನ್ನು ತೋರಿಸಲು ಹೇಳಿದರು. ನನ್ನ ಸ್ನೇಹಿತೆ ದೀಪಾಳ ಭಾವ ನವೀನ್ ಚಿಕ್ಕಮಗಳೂರಿನ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನೆನಪಿಗೆ ಬಂದು ಅವರಿಗೆ ದೂರವಾಣಿಯನ್ನು ಮಾಡಿ ಸಹಾಯ ಕೇಳಿದೆ. ಕುದುರೆಮುಖ ಅರಣ್ಯ ಪ್ರದೇಶವು ಮಂಗಳೂರು ವಲಯಕ್ಕೆ ಸೇರಿದ್ದು, ನವೀನ್ ಭಾವರವರ ಮಂಗಳೂರಿನ ಅಧಿಕಾರಿಯೊಟ್ಟಿಗಿನ ಮಾತುಕತೆಯ ನಂತರ ಅರಣ್ಯ ಇಲಾಖೆಯವರು ನಮಗೆ 50% ರಿಯಾಯಿತಿಯನ್ನು ಕೊಟ್ಟರು.

ಜಿತೇಂದ್ರ ಅವರ ಚಿಕ್ಕಪ್ಪನವರು ನಮಗೆಂದೇ ಒಂದು ಖಾಲಿ ಕ್ವಾಟ್ರಸ್ ಮನೆ(ಕನ್ನಡದಲ್ಲಿ ಕೇರಿ ಮನೆ ಅನ್ನೋದಕ್ಕೆ ಕೆಟ್ಟದಾಗಿರುತ್ತೆ ಅನ್ನಿಸ್ತು ಅದಕ್ಕೆ ಕ್ವಾಟ್ರಸ್ ಎಂದೇ ಬರೆದಿದ್ದೇನೆ)ಯನ್ನು ಶುಚಿಮಾಡಿಸಿಟ್ಟಿದ್ದರು. ಆ ಮನೆಯನ್ನು ಹೊಕ್ಕು ಅಲ್ಲಿ ಎಲ್ಲರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ಜಿತೇಂದ್ರ, ರಾಜೇಶ್ ಅವರ ಚಿಕ್ಕಪ್ಪ, ಚಿಕ್ಕಮ್ಮರವರೊಡಗೂಡಿ ಬಿಸಿ ಬಿಸಿ ಊಟ ತಂದರು. ಅನ್ನ, ಹುಳಿ(ಸಾಂಬಾರ್) ಮತ್ತು ಪಲ್ಯವನ್ನು ಭರ್ಜರಿಯಾಗಿ ತಿಂದ ನಾವು ಬಾಸ್ಕ್(BASC) ನ ನಿಯಮದಂತೆ ಎಲ್ಲರ ಸ್ವ-ಪರಿಚಯಕ್ಕಾಗಿ ಒಟ್ಟಾಗಿ ಕುಳಿತೆವು.

ವಿಶೇಷ ಪ್ರದರ್ಶನ ನೀಡಿದವರ ಪಟ್ಟಿ:
  • ಸುಮಂತ್(ಪಿ.ಕಾಳಿಂಗರಾವ್ ರವರ ಮೊಮ್ಮಗನಾಗಿ ಹಾಡು ಹೇಳೋ ಅಂದ್ರೆ ಎಷ್ಟು ಸಮಯ ತೊಗೊಂಡ ಬಡ್ಡಿ ಮಗ- ಮಸ್ಕಾ ಹೊಡೆಯೋಕೆ ಖರ್ಚಾದ ಬೆಣ್ಣೆ- 3 ಕಿ.ಗ್ರಾಂ.), ವಿಶ್ವಾಸ್(ಅನಿಸುತಿದೆ ಯಾಕೋ ಇಂದು-ಮುಂಗಾರು ಮಳೆ ), ಚಿರಾಗ್(ಯಾವ್ದೋ ಮರ್ತೊಗಿದೆ :( - ಹಿಂದಿ ಭಾಷೆದು ಅಂತಷ್ಟೇ ನೆನಪಿರೋದು ) - ತಮ್ಮ ಕಂಠ ಸಿರಿಗಾಗಿ
  • ಸ್ವಪ್ನಿಲ್ - ಉಲ್ಟಾ ಇಂಗ್ಲೀಷ್ ವರ್ಣಮಾಲೆ ಹೇಳಿದ್ದಕ್ಕಾಗಿ.
  • ವಿನಯ್ ನಾಗರಾಜು - ಮಿಕ್ಸ್ಚರ್ ಕೊಟ್ಟು ಹುಡುಗೀನ ಹೇಗೆ ಪಾಟಾಯ್ಸ್ಕೊಳೋದು ಅಂತ ತೋರಿಸಿಕೊಟ್ಟದ್ದಕ್ಕಾಗಿ.
  • ಹರ್ಷ್ ಮತ್ತು BIRTHDAY BOY ಅವಿನಾಶ್ - ತಮ್ಮ ಅಖಂಡ ನೆನಪಿನ ಶಕ್ತಿಗಾಗಿ( ಪ್ರತಿಯೊಬ್ಬ ಸಹ ಚಾರಣಿಗರ ಹೆಸರು ಮತ್ತು ಅವರ ಆಸಕ್ತಿಯನ್ನು ತಪ್ಪಿಲ್ಲದಂತೆ ಹೇಳಿದರು)
  • ಅಮೋಲ - ಕಾರು ಮಾರುವ ಮತ್ತು ಕೊಳ್ಳುವ ವ್ಯಾಪಾರ ಮಾಡುತ್ತೇನೆಂದು BRAND ಇಲ್ದಿರೋ BISCUIT ಹಾಕಿದ್ದಕ್ಕೆ.
  • ಗೌತಮ್ - ಸಚಿನ್ ತೆಂಡೂಲ್ಕರ್ ರವರ ಬಹು ದೊಡ್ಡ ಅಭಿಮಾನಿಯಾದ ಇವರು ನಮಗೆ ಹೊಸದಾದ ವಿಶೇಷ ಮಾಹಿತಿಯನ್ನು ನೀಡಿದರು(ತೆಂಡೂಲ್ಕರ್ ಹುಟ್ಟಿದ್ದು 1984!)
  • ಮುರಳಿ - ಐಡಿಯಾ ದೂರವಾಣಿಯಲ್ಲಿ ಕೆಲಸ ಮಾಡುವ ಇವರು ಎಷ್ಟು ಚೆನ್ನಾಗಿ ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂಬುದನ್ನು ತೋರಿಸಿಕೊಟ್ಟರು.
  • ರಾಜೇಶ್ - ಈ ಗಜಿನಿ ಬಗ್ಗೆ ಏನ್ ಹೇಳೋದ್ ರೀ - ಸತತ 3 ಬಾರಿ ಎಲ್ಲರೂ ತಮ್ಮ ಹೆಸರನ್ನು ಹೇಳಿದರೂ ಕಡೆಗೂ ಇವನು ಯಾರ ಹೆಸರನ್ನು ಸರಿಯಾಗಿ ಹೇಳಲಾರದೆ ಹೋದ. ನನ್ನ ಹೆಸರನ್ನು ವೈಶಾಲಿ ಅಂತ ತುಂಬಾನೇ ಆತ್ಮ ವಿಶ್ವಾಸದಿಂದ ನಿರ್ಧಾರಿತ ಧ್ವನಿಯಲ್ಲಿ ಹೇಳ್ದ ( ನಾನ್ BOOST ಕುಡ್ಯೋದು COMPLAN ಅಲ್ಲ). ಕೇವಲ ಮಿಕ್ಸ್ಚರ್ ಗೋಸ್ಕರ ಹುಡುಗನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ. ಒಟ್ಟಾರೆ ಹೇಳೋದಾದ್ರೆ ನಮ್ಮ ತಂಡದ ಕೇಂದ್ರ ಬಿಂದುವಾಗಿ, ಹಾಸ್ಯ ನಟನಾಗಿ ನಮಗೆಲ್ಲರಿಗೂ ಭರ್ತಿ ಮನರಂಜನೆ ನೀಡಿದ.
ಬೆಳಿಗ್ಗೆ ಹತ್ತಿರದ ಹೋಟೆಲ್ ನಲ್ಲಿ( 28.10.2012 ) ಉಪಹಾರವನ್ನು ಮುಗಿಸಿ ಮಧ್ಯಾಹ್ನಕ್ಕೆಂದು ಬುತ್ತಿ ಕಟ್ಟಿಸಿಕೊಂಡು ಕುರಿಂಜಾಲ್ ಪರ್ವತಾರೋಹಣಕ್ಕೆಂದು ಹೊರಟೆವು. 8:30ಕ್ಕೆ ನಮ್ಮನ್ನು ಸೇರಿಕೊಂಡ ಮಾರ್ಗದರ್ಶಿ(GUIDE)ಗಳಾದ ನಾಗರಾಜ್ ರವರು ಉತ್ಸಾಹಿ ತರುಣನಂತೆ ನಮ್ಮೊಟ್ಟಿಗೆ ಹೆಜ್ಜೆ ಹಾಕಿದರು.

ಆ ಸ್ಥಳದ ಬಗೆಗಿನ ಮಾಹಿತಿ, ಅಲ್ಲಿನ ಆಗು ಹೋಗುಗಳು, ಸರ್ಕಾರದ ಪಾತ್ರ ಮತ್ತು ಇತಿ ಮಿತಿಗಳು ಹೀಗೆ ನಾನಾ ತರಹದ ಮಾಹಿತಿಗಳನ್ನು ನಮಗೆ ನಾಗರಾಜ್ ರವರು ನೀಡುತ್ತಾ ಸಾಗಿದರು. ನಾವು ಎಷ್ಟರ ಮಟ್ಟಿಗೆ ಅದರಲ್ಲಿ ಮುಳುಗಿ ಹೋಗಿದ್ದೆವೆಂದರೆ ನಮ್ಮ ಅಂತಿಮ ಗುರಿ ಬಂದದ್ದೇ ತಿಳಿಯಲಿಲ್ಲ. 

ಮೇಲೆ ಭಾರತೀಯ ಸಂಚಾರ ನಿಗಮದವರು ಒಂದು ಪುಟ್ಟ ಕಟ್ಟಡವನ್ನು ಕಟ್ಟಿದ್ದಾರೆ. ನಾವು ಕೆಲವರು ಅಲ್ಲೇ ತಂಗಿದರೆ ಮತ್ತು ಕೆಲವು ಮಂದಿ ತುತ್ತ ತುದಿಯವರೆಗೂ ಹೋಗಿ ಬಂದು ತಿರುಗಿ ನಮ್ಮನ್ನು ಸೇರಿಕೊಂಡರು. ಅಲ್ಲಿಂದ ಕೆಳಗಿಳಿದು, ಜುಳು ಜುಳು ನಾದ ಮಾಡುತ್ತಾ, ನಿರ್ಮಲವಾಗಿ ನರ್ತಿಸುತ್ತಾ ಸಾಗುತ್ತಿದ್ದ ನೀರಿನಲ್ಲಿ ಮಿಂದು, ಕಟ್ಟಿಸಿಕೊಂಡು ಬಂದ ಪೂರಿ, ಸಾಗುವನ್ನು ತಿಂದು ಹೊರಡುವಷ್ಟರಲ್ಲಿ ಮಧ್ಯಾಹ್ನ 3 ಗಂಟೆ.     

                                                     ಓ ನನ್ನ ತುಂಗೆ, 
ಸಹ್ಯಪರ್ವತ ತೀರ್ಥ ಪೋಷಿತ ತರಂಗೆ,
   ನಿಬಿಡ ವನಮಾಲಿನಿಯೆ, ಪುಣ್ಯಶಾಲಿನಿಯೆ,
      ನೋಡಿದನಿತೂ ನಿನ್ನ ನೋಡಿ ನಾ ತಣಿಯೆ...
                                                        - ಕು.ವೆಂ.ಪು 

ಅಲ್ಲಿಂದ ಹೊರಟು ಸುಮಾರು 6 ಗಂಟೆಯ ಹೊತ್ತಿಗೆ ಹೊರನಾಡು ತಲುಪಿದ ನಾವು, ಅಲ್ಲಿ ತಾಯಿ ಅನ್ನಪೂಣೇಶ್ವರಿಯ ದರ್ಶನಗೈದು,ಬದುಕಿನುದ್ದಕ್ಕೂ ಅನ್ನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳೆಂದು ಪ್ರಾರ್ಥಿಸಿ, ಪ್ರಸಾದವನ್ನು ತಿಂದೆವು.  ಅವಿ ಅವನಿಗೆ ಪುಳಿಯೋಗರೆ ಕಡಿಮೆ ಹಾಕಿದರೆಂದು ಗೊಣಗುತ್ತಿದ್ದ. ಆಮೇಲೆ ಅನ್ನಪೂರ್ಣೆಗೆ ಇವನ ಮಾತು ಕೇಳಿಸಿತೆಂದು ತೋರುತ್ತದೆ, ಸಾರಿಗೆಂದು ಅನ್ನ ಹಾಕುವಾಗ ಹೆಚ್ಚಿಗೆ ಹಾಕಿಬಿಟ್ಟರು. ಕಷ್ಟ ಪಟ್ಟು ಅಂತೂ ಅದನ್ನು ಮುಗಿಸಿದ. ಅಲ್ಲಿ ಎಲ್ಲರಿಗೂ ಪ್ರಸಾದವನ್ನು ಚೆಲ್ಲದಂತೆ ಮೊದಲೇ ಸೂಚಿಸಿತ್ತಾದರೂ ವೀರು ಮಾತ್ರ ಅದನ್ನು ಪಾಲಿಸಲಿಲ್ಲ.

ನಂತರ ಕೆಲ ಸ್ನೇಹಿತರೊಟ್ಟಿಗೆ ನಾನು ಸಂಬಾರ ಪದಾರ್ಥಗಳನ್ನು ಕೊಳ್ಳಲು ಹೊರಟೆ. ಸಿದ್ಲಿಂಗು ಚಿತ್ರವನ್ನು ನೋಡಿ ಬಹಳವೇ ಉತ್ಸುಕನಾಗಿದ್ದ ವಿನಯ್ ನಾಗರಾಜು ಮಠ ಚಿತ್ರದ CDಗಾಗಿ ಅಲ್ಲಿ ಹುಡುಕಾಡಿದ. ದುರದೃಷ್ಟವಶಾತ್ ಅವನ ಪ್ರಯತ್ನ ಫಲಿಸಲಿಲ್ಲ. ರಾತ್ರಿ ಸುಮಾರು 9 ಗಂಟೆಗೆ ಹೊರನಾಡಿನಿಂದ ಹೊರಟ ನಾವು, ರಾಜಧಾನಿಯನ್ನು ತಲುಪುವಷ್ಟರಲ್ಲಿ ಮುಂಜಾನೆ 4:45.(30.10.2012)


ಶಾರದಾಂಬೆ ಮತ್ತು ಅನ್ನಪೂರ್ಣೆಯರನ್ನು ನಿರ್ವಿಘ್ನವಾಗಿ ನೋಡಲು ಮತ್ತು ಚಾರಣಕ್ಕೆ ಪರೋಕ್ಷವಾಗಿ ಸಹಾಯ ಮಾಡಿದವರೆಲ್ಲರಿಗೂ  ನನ್ನ ಮನದಾಳದ ಧನ್ಯವಾದಗಳು:

  • ನವೀನ್, ಚಿಕ್ಕಮಗಳೂರು - ಚಾರಣದ ಪ್ರವೆಶದರಕ್ಕೆ ರಿಯಾಯಿತಿಯನ್ನು ಕೊಡಿಸಿದ್ದಕ್ಕಾಗಿ.
  • ಜಿತೇಂದ್ರ ಮತ್ತು ರಾಜೇಶ್ ಅವರ  ಚಿಕ್ಕಪ್ಪನವರ ಕುಟುಂಬ - ಅನ್ನಪೂರ್ಣೆಶ್ವರಿಯ ಅಪರಾವತಾರವೆಂದೇ ಹೇಳಬೇಕು. ಅತಿಥಿ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ ಎಂದು ತೋರಿಸಿಕೊಟ್ಟರು.
  • ವಿನಯ್ KGS - ಚಾರಣದ ಹೊಣೆ ಹೊತ್ತು, ಧುತ್ತೆಂದು ಎದುರಾದ ಕೆಲವು ತಾತ್ಕಾಲಿಕ ಅಡೆತಡೆಗಳನ್ನು ನಿವಾರಿಸಿದ್ದಕ್ಕಾಗಿ.      
ನಮ್ಮ ಇಡೀ ಪ್ರವಾಸದಲ್ಲಿ ಒಂದೇ ಒಂದು ಬೇಸರ ತರಿಸಿದ ಸಂಗತಿ ಎಂದರೆ ಅವಿನಾಶ್ ಗೆ ಯಾರು BIRTHDAY BUMS ಹೊಡಿಲೇ ಇಲ್ಲ :-(

ಸೋಮವಾರ, ಅಕ್ಟೋಬರ್ 15, 2012

ಟಿ-ಶರ್ಟ್ ಉಲ್ಲೇಖಗಳು

2011ರಲ್ಲಿ ಕುಂಚ ಕನ್ನಡ ಶುಭಾಷಯ ಪತ್ರಗಳು ಅಂತ ಕನ್ನಡ GREETING CARD ಶುರು ಮಾಡ್ದಾಗ ಮುಂದೆ ಕನ್ನಡದ ಉಲ್ಲೇಖಗಳುಳ್ಳ ಟಿ-ಶರ್ಟ್ ಮಾಡ್ಬೇಕು ಅಂತ ನಾನು ಮತ್ತು ಸ್ನೇಹಿತ ವಿನಯ್ ಭಾರಿ ತಲೆ ಕೆಡುಸ್ಕೊಂಡ್ವಿ. ಆಗ ಮನಸ್ಸಿಗನ್ಸಿದ್ದನ್ನ ಒಂದಷ್ಟು ಗೀಚಿದ್ದೆ. ಅನಿವಾರ್ಯ ಕಾರಣಗಳಿಂದ ಅದು ಕೈಗೂಡಲಿಲ್ಲ.

ಈಗ ಬ್ಲಾಗ್ ನಲ್ಲಿ ಬರೀಬೇಕು ಅನ್ನಿಸ್ತು ಬರೀತಿದೀನಿ ....

© ಪಲ್ಲವಿ ರಂಗನಾಥ್ ( ಸ್ವಲ್ಪ ಜಾಸ್ತಿ ಆಯ್ತು ಒಸಿ ಅಡ್ಜಸ್ಟ್ ಮಾಡ್ಕೊಳಿ)

  • ನಮ್ ಕನ್ನಡಾನ ಇಷ್ಟ ಪಡೋಕೆ ಕಾವ್ಯ, ಕಗ್ಗ, ಕಾದಂಬರಿ ಎಲ್ಲಾ ಓದ್ಲೇಬೇಕಾ?... ಕನ್ನಡಾನ ಪ್ರೀತ್ಸೋ ಮನಸ್ಸಿದ್ದ್ರೆ ಸಾಲ್ದಾ?!!! 
  • ಮಾತು ಯಾವ ಭಾಷೇಲೆ ಆಡ್ರಿ, ಬಯ್ಯೋದ್ ಮಾತ್ರ ಕನ್ನಡದಲ್ಲೇ ಆಗಿರ್ಲಿ, ಆಗ್ಲೇ ಬಯ್ದಿದ್ ಬಾಯ್ಗೂ ಸಮಾದಾನ, ಮನಸ್ಸಿಗೂ ತೃಪ್ತಿ.
               ಹೇಗೆ ಅಂತೀರಾ - Let His Face Burn...ನೋಡಿ ನಿಮ್ಗೇನಾದ್ರು ಅನ್ಸತ್ತಾ ... 
                ಅವ್ನ್ ಮುಖ ಸುಡಾ -ಇದಪ್ಪಾ ನಮ್ ಭಾಷೆ ಗಮ್ಮತ್ತು.
  • ನಗುತ ನಗಿಸುತ ಎಲ್ಲರೊಳಗೊಂದಾಗಿ ಬಾಳೋ ಗುಣ ನನ್ನದು, ನಮ್ಮ ಕನ್ನಡಿಗರದು.  
  • ನಮ್ ಕನ್ನಡಾನ ನಾನ್ ಮಾತಾಡ್ತೀನಿ ಯಾರ್ ಏನ್ ಕಿತ್ತಾಕ್ಕೊತಾರೋ ಕಿತ್ಹಾಕೊಳ್ಳಿ.
  • ನಾವು ಕನ್ನಡಿಗರು ನಮಗದೇ ಹೆಮ್ಮೆ.
  • ಕೆಂಪೇಗೌಡ್ರ ನಾಡಲಿ ಕನ್ನಡ ಕಹಳೆ ಮೊಳಗಲಿ ನನ್ನಿಂದಲೇ ಅದು ಮೊದಲಾಗಲಿ.
  • ನಾನೇ ಬೇರೆ, ನಾನ್ ಕನ್ನಡಾನ ಪ್ರೀತ್ಸೋ ರೀತೀನೆ ಬೇರೆ. 

ಬುಧವಾರ, ಅಕ್ಟೋಬರ್ 10, 2012

ಕುಂಚ ಕನ್ನಡ ಶುಭಾಷಯ ಪತ್ರಗಳು




2011ರಲ್ಲಿ "ಕುಂಚ ಕನ್ನಡ ಶುಭಾಷಯ ಪತ್ರಗಳು" ಅನ್ನೋ ಹೆಸರಿನಲ್ಲಿ, ಕನ್ನಡ GREETINGS CARD ಅನ್ನು ಹೊರತಂದಿದ್ದೆ. ಅನಿವಾರ್ಯ ಕಾರಣಗಳಿಂದ ಅದನ್ನ ಮುಂದುವರೆಸೋಕೆ ಆಗ್ಲಿಲ್ಲ :-(
( ಕರ್ನಾಟಕದಲ್ಲಿ ಕನ್ನಡದ್ದು ಎಂಬ ಸೀಮಿತ ಮಾರುಕಟ್ಟೆಯಲ್ಲಿ ಉಸಿರಾಡೋ ಪ್ರಯತ್ನ ಪಟ್ಟು, ಕಡೆಗೂ ಬದುಕಲಾರದೆ ಕೆಲ ದಿನಗಳಲ್ಲೇ ಜೀವ ಬಿಟ್ಟ ಕೂಸು)



ಮೊದಲ ಅವತರಣಿಕೆಯ ಕೆಲ ಪ್ರತಿ ಇಲ್ಲಿದೆ.

ಒಂದೊಂದು ಪತ್ರದ ಹಿಂದಿನ ಅನುಭವ, ಬರಹ ಮತ್ತು ಛಾಯಾ ಚಿತ್ರಗಳೊಡನೆ ಭಾವನೆಗಳನ್ನು ಸಮ್ಮಿಳಿತಗೊಳಿಸಲು ನಾನು ಪ್ರಯತ್ನಿಸಿದ್ದು, ಎಲ್ಲವನ್ನೂ ನಿಮ್ಮೊಟ್ಟಿಗೆ ಹಂಚಿಕೊಳ್ಳೋ ಒಂದು ಪುಟ್ಟ ಪ್ರಯತ್ನ.

1. ಒಂದು ಮಾತಿದೆ - ಒಂದು ವಸ್ತುವನ್ನು ಪಡೆಯುವವರೆಗೂ ಗಂಡು ಅದನ್ನು ಪಡೆದೇ ತೀರಬೇಕೆಂದು ಪ್ರಯತ್ನಿಸುತ್ತಾನೆ ಮತ್ತು ಹೆಣ್ಣು ಆ ಸಂಬಂಧದ ನಂತರ ಅದನ್ನು ಉಳಿಸಿಕೊಳ್ಳಲು,ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.

ಈ ಉಲ್ಲೇಖವನ್ನು ಯಾರು ಬರೆದರೋ ಗೊತ್ತಿಲ್ಲ ಇದನ್ನ ಓದಿದ ಮೇಲೆ ನನಗೆ ಅನ್ನಿಸಿದ್ದು - ಒಂದು ಬಾಂಧವ್ಯವನ್ನು ಗಟ್ಟಿಗೊಳಿಸಲು ಚಿಕ್ಕ ಚಿಕ್ಕ ಸಂಗತಿಗಳು ಎಷ್ಟು  ಅನುವಾಗುತ್ತವೆ ಎಂದು. ಆಗ ಜನ್ಮ ತಳೆದದ್ದೆ ಈ ಶುಭಾಷಯ ಪತ್ರದ ಸಾಲುಗಳು. ಸಾಲುಗಳಿಗೆ ಚಿತ್ರದ ರೂಪ ಕೊಟ್ಟು ಜೀವ ತುಂಬುವಲ್ಲಿ ಅಕ್ಕ- ಸುಗಮ, ಭಾವ-ಮಂಜುನಾಥ್, ಸ್ನೇಹಿತರಾದ ವಿಶ್ವನಾಥ್ ಬಣಕಾರ್ ಮತ್ತು ವಿವೇಕ್ ಭಟ್ ರವರ ಶ್ರಮವಿದೆ.




2. ಒಂದು ಹುಡುಗಿಗೆ ತನ್ನ ಪ್ರೇಮನಿವೇದನೆಯನ್ನು ಹೇಳಿಕೊಳ್ಳುವ ಮುನ್ನ ಒಬ್ಬ ಹುಡುಗನಿಗಾಗುವ ತಳಮಳ - ನಿಸಾರ್ ಅಹಮದ್ ರವರ ಒಂದು ಪದ್ಯದ ಸಾಲಿನಂತೆ - ಬರುವೆಯೋ ಬಾರೆಯೋ ಎನ್ನುತಿದೆ ರಮ್ಯೋದ್ಯಾನ(ಹಾಡು-ಮತ್ತದೇ ಸಂಜೆ, ಅದೇ ಬೇಸರ) ಹುಡುಗನ ದ್ವಂದ್ವ ಭಾವನೆಗಳನ್ನ (ಅಂಡು ಸುಟ್ಟ ಬೆಕ್ಕಿನಂತೆ) ಚಿತ್ರದಲ್ಲಿ ಬಿತ್ತರಪಡಿಸಲು ಶ್ರಮ ಪಟ್ಟಿದ್ದು - ವಿವೇಕ್ ಮತ್ತು ಚೇತನ್.
ಚಹಾದ ಬಿಸಿ ಆರುವ ಮುನ್ನ ಬಾ - ಅನ್ನುವ ಧನಾತ್ಮಕ ಭಾವನೆಯ ಸಾಲು ಪತ್ರದ ಇನ್ನೊಂದು ಬದಿಯಲ್ಲಿದೆ.   

3. ಯಾರೋ ಒಂದ್ ಸಲ SMS ಕಳ್ಸಿದ್ರು  I MISS YOU ಅನ್ನೋದಕ್ಕೆ ಕನ್ನಡದಲ್ಲಿ ಏನಂತಾರೆ ಅಂತ - ನೀನು ಇಲ್ಲಿಲ್ಲ ಹಾಗಾಗಿ ನನ್ನಲಿ ನಾನಿಲ್ಲ - ಈ ತರ ಹೇಳ್ಬೋದೇನೋ ಅಂತ ಪ್ರತ್ಯುತ್ತರ ಕಳಿಸಿದ್ದೆ.

ಹುಟ್ಟು ಹಬ್ಬ ಅಂದರೆ ಹೊಸದಿನ, ಹೊಸತನ .... ಎದುರಿಗಿಲ್ಲದೆಯೂ ಎದುರಿಗಿರುವಂತೆ ಶುಭಾಶಯವನ್ನು ಎಷ್ಟು ಪರಿಣಾಮಕಾರಿಯಾಗಿ ಹೇಳಬಹುದು ಎಂದು ಆಲೋಚಿಸಿದಾಗ ಹುಟ್ಟಿದ್ದೇ ಈ ಪತ್ರದ ಸಾಲುಗಳು  ...



4. ಮನುಷ್ಯನಿಗೆ ಗುರಿ ಅನ್ನೋದು ಒಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲ. ಹಿಂದೆ ಆಗಿದ್ದೆಲ್ಲ BLACK and WHITE ಮುಂದೆ ಇರೋದು COLOURFUL ಅನ್ನೋದನ್ನ ಚಿತ್ರ ಮತ್ತು ಸಾಲುಗಳು ಹೇಳುತ್ತವೆ.

ಯಾರ್ ಬರ್ಲಿ,ಇರ್ಲಿ, ಹೋಗ್ಲಿ ಜೀವನ ಅಂತು ಸಾಗತ್ತೆ. ಆದರೆ ಬದುಕಿಗೊಂದು ಪರಿಪೂರ್ಣತೆ ಬರೋದು? - ಹೇಗೋ ಒಂದು ಅಂತ ಬದುಕ್ದಲೇ ಹೀಗೆ ಅಂತ ಬದುಕ್ದಾಗ.




ಸ್ಪೂರ್ತಿ :
  • You are the creator of your own DESTINY - Swamy Vivekananda
  • DREAMS is not what you see in sleep, is the thing which doesn't let you to sleep - Dr. APJ Kalam
         ನೀನಿಲ್ಲದೆಯೂ ನಾ ಬದುಕಬಲ್ಲೆ ಎಂಬ ಸಾಲು ಪತ್ರದ ಇನ್ನೊಂದು ಬದಿಯಲ್ಲಿದೆ.

ವಿಶೇಷ ಕೃತಜ್ಞತೆಗಳು:
  • ಬೆನ್ನು ತಟ್ಟಿ, ಬೆನ್ನೆಲುಬಾಗಿ ನಿಂತಿದ್ದಕ್ಕಾಗಿ - ವಿವೇಕ್ ಭಟ್, ವಿನಯ್ ಕುಮಾರ್, ಪುಷ್ಯಂತ್, ಅವಿನಾಶ್
  • ಫೋಟೋ ಕೃಪೆ: ವಿವೇಕ್ ಭಟ್, ವಿಶ್ವನಾಥ್ ಬಣಕಾರ್, ದೀಪಕ್ ನಾಯಕ್
  • ನನ್ನ ತಿಕ್ಕಲುತನವನ್ನೆಲ್ಲಾ ಸಹಿಸಿಕೊಂಡು, ನನ್ನ ಹುಚ್ಚು ಕಲ್ಪನೆ(IDEA)ಗಳಿಗೆ ಜೀವ ತುಂಬಲು ಕ್ಯಾಮೆರಾ ಕಣ್ಣಿಗೆ ಪೋಸು ಕೊಟ್ಟದ್ದಕ್ಕಾಗಿ : ಸುಗಮ, ಮಂಜುನಾಥ್ & ಚೇತನ್
  • ಸಹಾಯ - ಜಯಕೀರ್ತಿ & ವಿನಯ್-ತುಮಕೂರು 
  •  ಕರಡು ತಿದ್ದಿದ್ದಕ್ಕಾಗಿ - ಹರಿ ಪ್ರಕಾಶ್

ಸೋಮವಾರ, ಅಕ್ಟೋಬರ್ 1, 2012

Night Trek to Nijagal Betta - 29th & 30th Sep 2012



Even though I love to write my Experience in Kannada this time I am writing in English, since I organized this trek for first time from BASC( Bangalore Ascenders - www.bangaloreascenders.org) and some Non-Kannadigas were part of it.

About Nijgal Betta:

Nijgal Betta” which is situated in Bangalore -Tumkur Highway(NH-4) near to Dabaspet. Foot steps are there so it is very easy to climb. We Can reach peak in 1 to 1½  hours.

Ruins have their own charm and historical importance and Nijagal Betta is one of those which is the proof of Ruined Kingdom. It is with full of ruined caves, forts and temples.

A mid-seventeenth century fort, build by Chikkadevaraya Wadiyar, adorns this hillock. Here in Nijagal Betta, it’s believed that a war was fought between Hyder Ali and Peshwa Madhav Rao. 

In Durgastamaana Kannada Novel( By T.R.Subbarao famous as ತ.ರ.ಸು) explained about Nijgal fort like how strong that Fort was, how Chitradurga Paalegaara Madakari Nayaka, who supported Hyder Ali acquired Nijgal Fort n all.
Nijagal Mountain


Nijagal Betta - Singing Competition

Nijagal Betta - Kalyani

Nijagal Betta

Nijagal Betta - Ruined Temple



Nijagal Betta

Group Photo in BH Road
 

My Experience:

Contrary to the invite letter, I can no more call it a “Moon Light Night Trek”, as the dear MOON was hiding behind Clouds.  In spite of the last moment intimation, happy that 15 ASCENDers (1 drop & 1 on spot addition) ventured out for this Night Trek (or Treknic in Jinu John’s Language) gathered at our meeting point i.e., Govardhan Theatre(in front of Yeshwanthpur Railway Station) at 9:30 pm and started from there around 10pm. Around 11:10pm, we reached CCD (Café Coffee Day), situated around 55 K.M away from B’lore on Bangalore-Tumkur Highway ( NH-4)and treating CCD as our parking lot, we headed towards Nijgal Betta.Our first break for the night was around 12 midnight, when we had covered more than half the distance and had the Self-introduction session and a bit of ragging.

Here are the peeps who entertained us with their talent:
  • Abhinaya- Sung like Usha Uttup
  • Viswanath Banakar – Told “A for Apple” for the alphabets (He told many wrong words which is not part of LKG syllabus. For Eg. C for Camera!, which makes me suspect whether he really passed LKG or scrapped thru with the help of fake marks card!!)
  • Anuj Agarwal – mimicked Jinu John( Treknic Specialist)
  • Ashwin – Acted like a Handloom Weaver
  • Jagadeesh & Sayeesha – Briefed us about the Social cause they are part of.
  • Ram & Shruthi BK – Sung very beautifully.
  • Raveendra – Alphabet game in Kannada like A for Arasa., :D
  • Shruthi Revankar - Did Bharathanatyam 2nd Step.
After that bit of fun, we started trekking again and reached the destination by 1:30am. Our efforts to start camp fire was not successful, we lost our patience and dropped the idea.As it started raining, we took shelter under a huge rock.And there, just 4-5 of us started singing Kannada songs, only to realize, slowly everyone had joined us along which turned out to be an unforgettable moment of my life.  Vishwa’s effort to shift to hindi songs were failed by Jagadeesh (who love Tapanguchi songs) who sung songs like “ee nimbe hanninanta hudugi” and Sayeesha who sung “Bidde Bidde bath roomalli” (I don’t know why he fell down in Bath Room, that too in this age!!! ... He is just one month elder than Shruthi)        
                                                                            
Santosh & Ram’s Jugalbandi of Kannada Bhavageete (Light Music) was too good with Harsh’s BGM (Back Ground Music) and Ashwin’s was involved in singing to the core with full of Expression!! After that, we slept for a while and woke up in the morning due to the great Galata by the fellow Trekkers.Needless to say, I woke up scolding them. We ate chapatti, Biscuit and all and started descending in the drizzling rain. We reached CCD at 8:10am ( Sayeesha, Raveendra n Jinu reached at 8:35 and told that they lost the trail – Truth to be discovered yet). 
We headed to Kyatsandra(Towards Tumkur) to have our Breakfast in Pavithra Idly Hotel, which is famous in Karnataka for Tatte Idly (Plate Idly). After finishing our Breakfast and final settlement of trip expenses (which turned out to be only 75Rs. per head, excluding petrol) we headed back B’lore and reached Yaswanthpur by 10:30am.

Behind the Screen (As an organizer) :
As Saturday was a full moon day, I didn’t want to miss out the joy of moon light trekking and was discussing the same with one of my friend on Sat morning.  On an impulse, I sent a SMS to some of my BASC friends, to check would-they join, if I organize one for the night.The 4 positive replies which I got within 15 minutes, made me call Mudassar (BASC pillar) and ask for a permission to organize the trek. He was surprised and expressed his doubt that people may not join on late intimation (as it was already 10:30am).  I convinced him by giving details of the replies I’d got and got the “Go Ahead” signal from him.

It was my first experience as an organizer. I am in BASC since 2010 and attended so many treks, had supported organizers many times. But as an Independent organizer, I was a bit nervous initially and later after meeting everyone at the meeting point my heart beat comes to normal condition!!

In mail I’d mentioned that “Full Moon will give you a warm welcome”, but unfortunately we couldn’t see the Moon and Harsh was pulling my leg by repeatedly asking “where is the MOON?”

Special Thanks to:

Muddassar - For his support and Motivation to organise. 
Shruthi BK - For nice photographs.
Chandrakala Venkatesh- For Proof Reading of this Blog.

Needful Information:

Place: Nijagal, Tumkur Dist. Karnataka
Distance: 55 KM from Bangalore
Nearest Town: Dabaspet
How to Travel : Own Vehicle/ Private Bus (will stop at CCD on Request).
Route: Bangalore-Tumkur Highway(NH-4) – Dabaspet CCD(Café Coffee Day) – Park your Vehicle there n start Trekking – Move little bit say 0.2 KM towards Tumkur – Take left – Go in Tunnel below Railway track – Leads to Nijgal Betta.